ಭ್ರಷ್ಟ ಜಯಲಲಿತಾ ಯಾವೆಲ್ಲದರ ಫಲಿತಾಂಶ?

ಅಧಿಕೃತವಾಗಿ ತನ್ನ ಸ್ವಂತದವರೆಂದು ಹೇಳಿಕೊಳ್ಳಲು ಮತ್ತೊಂದು ಜೀವ ಜೊತೆಗಿರದ ಜಯಲಲಿತಾ ಇವೆಲ್ಲವನ್ನೂ ಮಾಡಿಟ್ಟಿದ್ದು ಯಾಕಾಗಿ? ತನ್ನ ನೆಲದ ಬಡ ಜನರಿಗೆ ರೂಪಾಯಿಗೊಂದು ಇಡ್ಲಿ, ಕುಡಿಯುವ ನೀರು, ಸೂರು ಎಂದೆಲ್ಲ ಜನಪರ – ಜನಪ್ರಿಯ ಯೋಜನೆಗಳನ್ನು ರೂಪಿಸಿದ ಜಯಲಲಿತಾ ಅದೇ ಜನರ ತೆರಿಗೆ ಹಣವನ್ನು ನುಂಗಿ ಕೂತಿರುವುದು ಯಾಕೆ? ನಿಜಕ್ಕೂ ಈ ಪರಿಯ ಹಪಾಹಪಿ ಅವರಲ್ಲಿದೆಯೇ? ತುಸು ಜಂಭದ, ಆದರೆ ಅಪ್ರಮಾಣಿಕತೆ ಕಾಣದ ಅವರ ಮುಖ ಹಾಗೂ ನಿಲುವಿನಲ್ಲಿ ಮೋಸವಿದೆಯೇ? ಇಂದು ನಾವು ನೋಡುತ್ತಿರುವ ಭ್ರಷ್ಟ ರಾಜಕಾರಣಿ ಜಯಲಲಿತಾ ರೂಪುಗೊಂಡಿದ್ದು ಹೇಗೆ?

ಬದುಕನ್ನು ಗಂಡು – ಹೆಣ್ಣೆಂಬ ಭೇದ ಮೀರಿದ ದೃಷ್ಟಿಕೋನದಿಂದ ನೋಡಬೇಕೆನ್ನುವುದು ನಿಜವಾದರೂ ಅದರ ಹೊರಳಾಟಗಳನ್ನು ನೋಡುವಾಗ ಈ ಭೇದದ ಊರುಗೋಲು ಅಗತ್ಯವಾಗಿಬಿಡುತ್ತದೆ. ಏಕೆಂದರೆ, ಬದುಕು ಒಂದೇ ಆದರೂ ಅದನ್ನು ಹೆಣ್ಣು ಎದುರುಗೊಳ್ಳುವ ಬಗೆಯೇ ಬೇರೆ ಮತ್ತು ಗಂಡು ಒಳಗೊಳಿಸಿಕೊಳ್ಳುವ ಬಗೆ ಬೇರೆ. ಏಕೆಂದರೆ, ನಾಗರಿಕತೆಯ ಆರಂಭಕಾಲದಿಂದಲೂ ಗಂಡು ಹೆಣ್ಣಿಗೆ ಕೊಡಲಾಗಿರುವ ಅವಕಾಶಗಳು ಹಾಗಿವೆ.

ಎಂಜಿಆರ್ ಜೊತೆ

ಎಂಜಿಆರ್ ಜೊತೆ

ಸದ್ಯದ ಭಾರತೀಯ ರಾಜಕಾರಣದ ಮುಖ್ಯಧಾರೆಯಲ್ಲಿರುವ ಐವರು ಹೆಣ್ಣುಗಳ ಬದುಕು ಮತ್ತು ಸಾಧನೆಗಳು ವಿಶಿಷ್ಟವೇ. ಅವರ ಹಗರಣಗಳೂ ಕೂಡಾ. ಭ್ರಷ್ಟಾಚಾರದ ವಿಷಯಕ್ಕೆ ಬಂದಾಗ ಅಲ್ಲಿ ಕೂಡ ಲಿಂಗ ತಾರತಮ್ಯ ಇರುವುದಿಲ್ಲ. ವಿಚಾರಣೆ, ಶಿಕ್ಷೆ, ಪರಿಣಾಮಗಳಿಗೆ ಸಂಬಂಧಿಸಿದಂತೆ ಅದನ್ನು ತರತಮವಿಲ್ಲದೆಯೇ ನೋಡಬೇಕಾಗುತ್ತದೆ. ಈ ಸಾಮಾಜಿಕ ಆಯಾಮವನ್ನು ಮೀರಿ, ಮಾನಸಿಕ ಸ್ತರದಲ್ಲಿ ನೋಡುವಾಗ, ಮಾನವೀಯ ಚಿಂತನೆಗೆ ಹಚ್ಚಿ ನೋಡುವಾಗ ಬಿಚ್ಚಿಕೊಳ್ಳುವ ದೃಶ್ಯಗಳೂ ಬೇರೆಯೇ ಇರುತ್ತವೆ. ಅಲ್ಲಿ ಮಾಯಾವತಿಯ ಮೂರ್ತಿಗಳಿಗೆ, ಚಿನ್ನದ ಕತ್ತಿಗಳಿಗೆ ಬೇರೆಯೇ ಅರ್ಥ ಕಾದಿರುತ್ತದೆ. ಹಿಂಜಿಹೋದ ಕಾಟನ್‌ ಸೀರೆಯನ್ನಷ್ಟೆ ಉಡುವ ಮಮತಾ ಬ್ಯಾನರ್ಜಿಯ ಹೆಸರು ಯಾಕೆ ಚೀಟಿ ವ್ಯವಹಾರದಂಥದರಲ್ಲಿ ಕಾಣಿಸುತ್ತದೆ ಎಂಬುದರ ಅರಿವಾಗುತ್ತದೆ. ಯಾಕೆ ಉಮಾ ಭಾರತಿ ಹಾಗೆ ರಚ್ಚೆ ಹಿಡಿದ ಮಗುವಿನಂತಾಡುತ್ತಾರೆ ಎಂದರೆ ಅವರ ಸೋತ ಹೃದಯದ ನೋವು ಕೇಳಿಸುತ್ತದೆ. ಸೋನಿಯಾರ ನಗುವಿಲ್ಲದ ಮುಖವೂ ಅವರ ಪರಿವಾರದೊಂದಿಗೆ ಹೆಣೆದುಕೊಂಡ ಹಗರಣಗಳು, ಹಣದ ವ್ಯವಹಾರಗಳು ಮತ್ತೊಂದೇ ಕಥೆ ಹೇಳತೊಡಗುತ್ತವೆ. ಈ ಎಲ್ಲವನ್ನು ಆ ಎಲ್ಲರ ಅಪರಾಧಗಳ ಸಮರ್ಥನೆಗಾಗಿ ಖಂಡಿತ ಬಳಸಬಾರದು. ಆದರೆ ಅರ್ಥೈಸಿಕೊಳ್ಳಲು ಮತ್ತು ನಮ್ಮನಮ್ಮ ಸ್ತರಗಳಲ್ಲಿ ಅವನ್ನು ಅನ್ವಯಿಸಿಕೊಂಡು ನೋಡಲು ಇವು ಬೇಕಾಗುತ್ತವೆ.
ಜಯಲಲಿತಾ ಬೇಲ್‌ಗೆ ಅರ್ಜಿ ಹಾಕಿಕೊಂಡು ಕೂತಿದ್ದಾರೆ. ಅವರ ಚಪ್ಪಲಿ ಸಂಖ್ಯೆಗಳ, ಸೀರೆಗಳ, ಚಿನ್ನ ಭಂಡಾರದ ಚರ್ಚೆ ನಡೆಯುತ್ತ ಆಕೆಯ ಭ್ರಷ್ಟತೆಯ ಚರ್ಚೆ ಸಾಗುತ್ತಿದೆ. ಇವುಗಳಾಚೆ ಜಯಲಲಿತ ಸಾವಿರಾರು ಎಕರೆ ಭೂಮಿ, ಸ್ಥಿರ – ಚರಾಸ್ತಿಗಳನ್ನು ಮಾಡಿಟ್ಟುಕೊಂಡಿದ್ದಾರೆ. ಅಧಿಕೃತವಾಗಿ ತನ್ನ ಸ್ವಂತದವರೆಂದು ಹೇಳಿಕೊಳ್ಳಲು ಮತ್ತೊಂದು ಜೀವ ಜೊತೆಗಿರದ ಜಯಲಲಿತಾ ಇವೆಲ್ಲವನ್ನೂ ಮಾಡಿಟ್ಟಿದ್ದು ಯಾಕಾಗಿ? ತನ್ನ ನೆಲದ ಬಡ ಜನರಿಗೆ ರೂಪಾಯಿಗೊಂದು ಇಡ್ಲಿ, ಕುಡಿಯುವ ನೀರು, ಸೂರು ಎಂದೆಲ್ಲ ಜನಪರ – ಜನಪ್ರಿಯ ಯೋಜನೆಗಳನ್ನು ರೂಪಿಸಿದ ಜಯಲಲಿತಾ ಅದೇ ಜನರ ತೆರಿಗೆ ಹಣವನ್ನು ನುಂಗಿ ಕೂತಿರುವುದು ಯಾಕೆ? ನಿಜಕ್ಕೂ ಈ ಪರಿಯ ಹಪಾಹಪಿ ಅವರಲ್ಲಿದೆಯೇ? ತುಸು ಜಂಭದ, ಆದರೆ ಅಪ್ರಮಾಣಿಕತೆ ಕಾಣದ ಅವರ ಮುಖ ಹಾಗೂ ನಿಲುವಿನಲ್ಲಿ ಮೋಸವಿದೆಯೇ? ಇಂದು ನಾವು ನೋಡುತ್ತಿರುವ ಭ್ರಷ್ಟ ರಾಜಕಾರಣಿ ಜಯಲಲಿತಾ ರೂಪುಗೊಂಡಿದ್ದು ಹೇಗೆ?
~

ಅಮ್ಮನ ಜೊತೆ ಪುಟ್ಟ ಜಯಲಲಿತಾ

ಅಮ್ಮನ ಜೊತೆ ಪುಟ್ಟ ಜಯಲಲಿತಾ

ಜಯಲಲಿತಾ ಅಪ್ಪಟ ಜೀವನ ಪ್ರೀತಿಯ ಹೆಣ್ಣಾಗಿದ್ದವರು. ಬಿಷಪ್‌ ಕಾಟನ್ಸ್‌ನಲ್ಲಿ ಓದುತ್ತಿದ್ದ ಕಾಲಕ್ಕೆ ಬಹಳ ಬುದ್ಧಿವಂತೆ ಮತ್ತು ಪಠ್ಯೇತರ ಪುಸ್ತಕಗಳನ್ನೂ ಓದುವ ಆಸಕ್ತಿ ಇದ್ದವರು. ಹಾಡು, ನೃತ್ಯ, ಆಟ ಎಲ್ಲದರಲ್ಲು ಸದಾ ಪುಟಿಯುವ ಉತ್ಸಾಹ. ಅವತ್ತಿನ ಕ್ರಿಕೆಟಿಗ ಪಟೌಡಿಯ ಮೇಲೆ ಕ್ರಶ್ ಬೆಳೆಸಿಕೊಂಡಿದ್ದ ಜಯಾ, ಅವರನ್ನ ನೋಡಲಿಕ್ಕೆಂದೇ ಕ್ರಿಕೆಟ್‌ಗೆ ಹೋಗ್ತಿದ್ದರಂತೆ!
ಅವರಮ್ಮ ಸಂಧ್ಯಾ ನಟಿಯಾಗಿ ಮಗಳನ್ನು ಸಲಹುತ್ತಿದ್ದ ಕಾಲಕ್ಕೆ ಒಮ್ಮೆ ಜಯಲಲಿತಾ ಸುಮ್ಮನೆ ಮೇಕಪ್‌ ಬಾಕ್ಸಿನಿಂದ ಏನೆಲ್ಲ ತೆಗೆದು ಮುಖಕ್ಕೆ ಹಚ್ಚಿಕೊಂಡಿದ್ದರಂತೆ. ಆಗ ಅವರಮ್ಮ “ನನ್ನದಂತೂ ಹೀಗಾಯಿತು, ನೀನು ಮಾತ್ರ ಇದನ್ನೆಲ್ಲ ಮಾಡೋದು ಬೇಡ” ಅಂದಿದ್ದರಂತೆ. ಆದರೆ ಇದೇ ಅಮ್ಮ ಕೆಲವೇ ವರ್ಷಗಳ ನಂತರ ಮಗಳನ್ನು ನಟನೆಗೆ ಒತ್ತಾಯಿಸಬೇಕಾಗಿ ಬಂದಿದ್ದು ದುರಂತ. ಆ ಹೊತ್ತಿಗೆ ಜಯಾ ಶಾಲೆಯಲ್ಲಿ ಒಳ್ಳೆಯ ಅಂಕ ಪಡೆದು ಮುಂದಿನ ಓದಿಗೆ ಸ್ಕಾಲರ್‌ಶಿಪ್ಪನ್ನೂ ಪಡೆದಿದ್ದರು. ಆದರೆ ಕುಟುಂಬ ಹೊರೆಯುವ ಅನಿವಾರ್ಯತೆ ಅವರನ್ನ ನಟನೆಗೆ ನೂಕಿತ್ತು. ವಿ.ವಿ.ಗಿರಿಯವರ ಮಗ ತೆಗೆದ ಇಂಗ್ಲಿಶ್‌ ಸಿನೆಮಾ ಒಂದರಲ್ಲಿ ಅಭಿನಯಿಸುವ ಮೂಲಕ ಭರ್ಜರಿ ಓಪನಿಂಗ್ ಶುರು ಮಾಡಿದರು ಜಯಲಲಿತಾ. ಆಗ ಅವರಿಗೆ ಕೇವಲ ಹದಿನೈದು ವರ್ಷ ವಯಸ್ಸು.
ಮುಂದೆ ತೆಲುಗು, ತಮಿಳು, ಕನ್ನಡ, ಒಂದೆರಡು ಹಿಂದಿ ಚಿತ್ರಗಳು ಎಂದೆಲ್ಲ ಹಿಟ್‌ ಸಿನೆಮಾಗಳಲ್ಲಿ ಅಭಿನಯಿಸಿ ಅಕ್ಷರಶಃ ಚಿತ್ರರಂಗವನ್ನು ಆಳತೊಡಗುತ್ತಾರೆ. ಕೇವಲ ಸೌಂದರ್ಯವಷ್ಟೆ ಅಲ್ಲ, ಬುದ್ಧಿವಂತಿಕೆಯೂ ಇದ್ದ ಈ ಹುಡುಗಿ ಅವತ್ತಿನ ದಕ್ಷಿಣ ಭಾರತದ ಸೂಪರ್‌ ಸ್ಟಾರ್‌ ಎಂಜಿಆರ್‌ ಕಣ್ಣು ಕುಕ್ಕಲಿಕ್ಕೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಮೆಲ್ಲಗೆ ರಾಜಕಾರಣದಲ್ಲೂ ತೊಡಗಿಸಿಕೊಳ್ಳುತ್ತಿದ್ದ ಎಂಜಿಆರ್‌ ಜಯಲಲಿತಾರಿಗೆ ತಮ್ಮ ಜೊತೆ ನಟಿಸಲು ಅವಕಾಶ ಕೊಡುತ್ತ, ತಮ್ಮೊಡನೆಯೇ ಇರಿಸಿಕೊಂಡು ಪ್ರಮೋಟ್ ಮಾಡುತ್ತಾರೆ. ಆಕೆಯ ಆಕರ್ಷಕ ವ್ಯಕ್ತಿತ್ವ, ಸ್ನೇಹಪರತೆ ಮತ್ತು ಮಾತುಗಾರಿಕೆ ತನಗೆ ಲಾಭವಾಗುತ್ತದೆಂದು ಪಕ್ಷದೊಳಕ್ಕೂ ಬಿಟ್ಟುಕೊಳ್ತಾರೆ. ಅಲ್ಲಿಂದ ಮುಂದೆ ಜಯಲಲಿತಾ ಎಂಜಿಆರ್‌ ಚಿತ್ರಗಳ ಖಾಯಂ ನಾಯಕಿ ಎಂದಾಗಿಬಿಡುತ್ತದೆ.

ಶೋಭನ್ ಬಾಬು ಜೊತೆ

ಶೋಭನ್ ಬಾಬು ಜೊತೆ

ಆದರೆ ಎಂಜಿಆರ್‌ ಏಳು ಕೆರೆಯ ನೀರು ಕುಡಿದವರು. ಜಯಲಲಿತಾ ಅವರಿಗೊಂದು ಆಯ್ಕೆ ಅಷ್ಟೇ. ಹಾಗೆಂದೇ ಇದ್ದಕ್ಕಿದ್ದಂತೆ ತಮ್ಮ ಒಂದು ಸಿನೆಮಾಕ್ಕೆ ಬೇರೆ ನಾಯಕಿಯನ್ನ ಹಾಕಿಕೊಳ್ತಾರೆ. ಜಯಲಲಿತಾರ ಸ್ವಾಭಿಮಾನ ಹಾಗೂ ಆತ್ಮಗೌರವದ ಪರಿಚಯ ಆಗೋದು ಆವಾಗಲೇ. ಹೆಚ್ಚೂಕಡಿಮೆ ತನ್ನನ್ನು ಪ್ರೇಯಸಿಯಂತೆಯೇ ನಡೆಸಿಕೊಳ್ತಿದ್ದ ಎಂಜಿಆರ್‌ ವಿರುದ್ಧ ಸಿಡಿದು ಬೀಳುವ ಜಯಾ ತೆಲುಗಿನತ್ತ ಮುಖ ಮಾಡುತ್ತಾರೆ. ಅಲ್ಲಿನ ಸೂಪರ್‌ ಸ್ಟಾರ್‌ ಶೋಭನ್‌ ಬಾಬುವಿನ ಜೊತೆ ನಟಿಸತೊಡಗುತ್ತಾರೆ. ಅವರೊಂದಿಗೆ ಲಿವ್‌ಇನ್‌ ಬದುಕು ಆರಂಭಿಸುವ ಜಯಲಲಿತಾ ಅವರನ್ನು ಇನ್ನಿಲ್ಲದಂತೆ ಪ್ರೇಮಿಸುತ್ತಾರೆ ಕೂಡಾ. ಬಹುಶಃ ಜಯಾ ಬದುಕಿನ ಮೊದಲ ಮತ್ತು ಕೊನೆಯ ಪ್ರೇಮ ಅದೊಂದೇ. ಎಂಜಿಆರ್‌ ಜೊತೆ ಅವರಿಗೆ ಇದ್ದದ್ದು ಮುಲಾಜು ಮಾತ್ರ.

ಇದೇ ಮುಲಾಜು ಮತ್ತೆ ಅವರಿಬ್ಬರನ್ನು ಒಂದುಗೂಡಿಸುತ್ತದೆ. ಎಂಜಿಆರ್‌ ಜಯಲಲಿತಾರನ್ನು ಪುಸಲಾಯಿಸಿ ಮತ್ತೆ ತಮ್ಮತ್ತ ಸೆಳೆದುಕೊಳ್ಳುತ್ತಾರೆ. ಅವರ ಪಕ್ಷಕ್ಕೆ ಕೆಲಸ ಮಾಡುತ್ತ ಪುನಃ ಎಂಜಿಆರ್‌ ಕಡೆ ವಾಲುವ ಜಯಾ ಶೋಭನ್‌ ಬಾಬುವನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾರೆ.

“ನನ್ನ ಬದುಕಲ್ಲಿ ಬಂದ ಯಾವ ಗಂಡಸೂ ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ” ಎಂದು ಒಂದೆಡೆ ಹೇಳಿಕೊಳ್ಳುವ ಜಯಲಲಿತಾ ಎಂಜಿಆರ್‌ರಿಂದ ಹೊಡೆತ ತಿಂದಿದ್ದೂ ಇದೆ. ಈಕೆಯ ಹಿಂದೆ ಗೂಢಚಾರರನ್ನು ಬಿಟ್ಟು ಪ್ರತಿ ದಿನದ ಅಪ್‌ಡೇಟ್ಸ್ ತರಿಸಿಕೊಳ್ತಿದ್ದರಂತೆ ಎಂಜಿಆರ್‌. ಆ ಮನುಷ್ಯ ಈಕೆಯನ್ನು ಪ್ರಮೋಟ್‌ ಮಾಡಿದ್ದಕ್ಕಿಂತ ಗೋಳಾಡಿಸಿದ್ದೇ ಹೆಚ್ಚು. ಬಹುಶಃ ಈ ಕಾರಣದಿಂದಲೇ ಜಯಲಲಿತಾ ಶಶಿಕಲಾರನ್ನು ತಮ್ಮ ಅಂತರಂಗಕ್ಕೆ ಬಿಟ್ಟುಕೊಳ್ಳುವುದು ಮತ್ತು ತಮ್ಮ ಸಂಪೂರ್ಣ ಜವಾಬ್ದಾರಿಯನ್ನು ಅವರ ಹೆಗಲಿಗೆ ಹೊರಿಸುವುದು.
ಈಗ ಜಯಾ ಆಪ್ತ ಸಹಾಯಕಿ ಎಂದೇ ಬಿಂಬಿತವಾಗುತ್ತಿರುವ ಶಶಿಕಲಾ ಮೊದಲು ಬಂದಿದ್ದು ಈಕೆಯ ವಿರುದ್ಧ ಸ್ಪೈ ಮಾಡಲೆಂದೇ. ಸ್ವತಃ ಎಂಜಿಆರ್‌ ಆಕೆಯನ್ನು ಅದಕ್ಕಾಗಿ ಕರೆಸಿದ್ದರೆಂದು ಹೇಳಲಾಗುತ್ತದೆ.

ಶಶಿಕಲಾ...

ಶಶಿಕಲಾ…

ವಿಡಿಯೋ ಪಾರ್ಲರ್ ಒಂದನ್ನು ನಡೆಸುತ್ತಿದ್ದ ಶಶಿಕಲಾ ಏಕಾಏಕಿ ಜಯಾ ಬದುಕಿನ ಸೂತ್ರಗಳೆಲ್ಲವನ್ನು ತನ್ನ ಮುಷ್ಟಿಯಲ್ಲಿ ಹಿಡಿದು, ತಾನಿಲ್ಲದೆ ಆಕೆಯ ಕೆಲಸಗಳ್ಯಾವುದೂ ನಡೆಯದು ಎನ್ನುವ ಮಟ್ಟಕ್ಕೆ ತಂದಿಡುತ್ತಾರೆ. ಇದು ಕೇವಲ ಗೃಹಕೃತ್ಯಗಳಿಗಷ್ಟೇ ಅಲ್ಲ, ಜಯಾ ರಾಜಕಾರಣಕ್ಕೂ ಹರಡುತ್ತದೆ. ಜಯಾರಿಗಿರುವ ಶಶಿಕಲಾ ಮೇಲಿನ ಅವಲಂಬನೆ ಮತ್ತು ಅದರಿಂದಾಗುತ್ತಿರುವ ಅನಾಹುತಗಳ ಕುರಿತು ಎಚ್ಚರಿಸಿದವರನ್ನೆಲ್ಲ ದೂರ ಮಾಡುತ್ತ ಬರುತ್ತಾರೆ ಜಯಲಲಿತಾ. ಸಾಕಷ್ಟು ಸ್ನೇಹ ಸಂಪಾದಿಸಿದ ಮೇಲೆ ಒಂದು ದಿನ ಶಶಿಕಲಾ ತನ್ನ ತವರು ಮನ್ನಾರ್‌ಗುಡಿಯಿಂದ ನಲವತ್ತು ಜನರನ್ನು ಕಟ್ಟಿಕೊಂಡು ಜಯಲಲಿತಾರ ಬಂಗಲೆಯ ಮುಂದೆ ಬಂದಿಳಿಯುತ್ತಾರೆ. ಅಲ್ಲಿದ್ದವರನ್ನೆಲ್ಲ ಓಡಿಸಿ, ಅಡುಗೆಮನೆಯಿಂದ ಹಿಡಿದು ಗೇಟು ಕಾಯುವವರೆಗೆ ಎಲ್ಲ ಕಡೆಯಲ್ಲೂ ತನ್ನ ಜನರೇ ಇರುವಂತೆ ನೋಡಿಕೊಳ್ಳುತ್ತಾರೆ. ಅಧಿಕಾರದ ಆಯಕಟ್ಟಿನ ಜಾಗಗಳಲ್ಲಿ ತನ್ನ ಪರಿವಾರದವರನ್ನು ಕೂರಿಸಿ ಹಣ ದೋಚಲು ಶುರುವಿಡುತ್ತಾರೆ. ೧೯೯೬ ವೇಳೆಗೆ ಶಶಿಕಲಾ ಮಾತ್ರವಲ್ಲ, ಆಕೆಯ ವಂಶದ ಕಟ್ಟಕಡೆಯ ಸದಸ್ಯನೂ ಕೋಟ್ಯಧೀಶ್ವರನಾಗುವಂತೆ ನೋಡಿಕೊಳ್ಳುತ್ತಾರೆ ಶಶಿಕಲಾ. ಕೆಲವು ವರ್ಷಗಳ ಹಿಂದೆ ಜಯಲಲಿತಾ ಶಶಿಕಲಾ ಮತ್ತವರ ಪರಿವಾರದಿಂದ ಉಸಿರುಗಟ್ಟಿ, ಎಲ್ಲ ಕಡೆಯಿಂದಲೂ ಬುದ್ಧಿಮಾತು ಕೆಳಿ ಜ್ಞಾನೋದಯವಾದಂತಾಗಿ ಆಕೆಯನ್ನು ಹೊರಗಟ್ಟುತ್ತಾರೆ. ಪಕ್ಷದಿಂದಲೂ ಮನೆಯಿಂದಲೂ ಆಚೆ ಇಡುತ್ತಾರೆ. ಆದರೆ ಈ ಮುನಿಸು ಬಹಳ ಕಾಲ ಬಾಳಲಿಲ್ಲ. ಜಯಲಲಿತಾರ ಅನಾಥಪ್ರಜ್ಷೆ, ಅಸಹಾಯಕತೆ, ದೌರ್ಬಲ್ಯಗಳೆಲ್ಲವನ್ನು ನಿಭಾಯಿಸುತ್ತ ಆಕೆಯನ್ನು ವಶೀಕರಣ ಮಾಡಿಕೊಂಡಂತೆ ಇದ್ದ ಶಶಿಕಲಾರನ್ನು ಕೇವಲ ಒಂದೇ ವರ್ಷದಲ್ಲಿ ಮರಳಿ ಕರೆಸಿಕೊಳ್ತಾರೆ ಜಯಾ. ಬಹುಶಃ ಜಯಲಲಿತಾರ ಇಂದಿನ ಸ್ಥಿತಿಗೆ ಶಶಿಕಲಾ ಮತ್ತು ಸುಬ್ರಮಣಿಯನ್‌ ಸ್ವಾಮಿ ಹೇಳುವಂತೆ ಆಕೆಯ ಮನ್ನಾರ್‌ಗುಡಿ ಗ್ಯಾಂಗ್‌ ಮುಖ್ಯ ಕಾರಣ.
~

ಕಾಯುತ್ತಲೇ ಇದೆ ಕನ್ನಡಿ, ನಿಜದ ಮುಖ ಮರಳಿ ಬರುವುದಕ್ಕಾಗಿ...

ಕಾಯುತ್ತಲೇ ಇದೆ ಕನ್ನಡಿ,
ನಿಜದ ಮುಖ ಮರಳಿ ಬರುವುದಕ್ಕಾಗಿ…

ಜಯಲಲಿತಾ ಇಷ್ಟೆಲ್ಲ ದೂರ ಕ್ರಮಿಸಿದ್ದು ಹೂವಿನ ದಾರಿಯ ನಡಿಗೆಯಿಂದಲ್ಲ. ಎಂಜಿಆರ್‌ ಆಕೆಯನ್ನು ಬೆಳೆಸಿದಂತೆ ಕಂಡರೂ ಆತ ಆಕೆಯನ್ನು ಬಳಸಿಕೊಂಡಿದ್ದೇ ಹೆಚ್ಚು. ತನ್ನ ಪ್ರೇಮವನ್ನೂ ಮುರಿದುಕೊಂಡು ಅವರಿಗೆ ಯೀಲ್ಡ್‌ ಆದ ಜಯಲಲಿತಾ ಅದಕ್ಕೆ ತಕ್ಕ ಪ್ರತಿಫಲವನ್ನು ಬಯಸಿದರು. ಎಂಜಿಆರ್‌ ಸ್ಟ್ರೋಕ್‌ ಹೊಡೆದು ಹಾಸಿಗೆ ಹಿಡಿದಾಗ ದೆಹಲಿಗೆ ತೆರಳಿದ ಜಯಲಲಿತಾ, ಅವರ ಅಸಾಮರ್ಥ್ಯದ ಕಾರಣ ನೀಡಿ ತಮ್ಮನ್ನೆ ಮುಖ್ಯಮಂತ್ರಿಯಾಗಿ ನೇಮಿಸುವಂತೆ ಕೇಳಿಕೊಂಡಿದ್ದರು! ಇದರಿಂದ ಕೆಂಡಾಮಂಡಲರಾದ ಎಂಜಿಆರ್‌ ಆಕೆಯನ್ನು ತರಾಟೆಗೆ ತೆಗೆದುಕೊಂಡರು. ಅದಕ್ಕೆ ಜಯಾ ಕೊಟ್ಟ ಉತ್ತರ ಸ್ಪಷ್ಟವಿತ್ತು. “ಇಂದು ನಾನು ಬೆಳೆದು ನಿಂತ ಪ್ರತ್ಯೇಕ ವ್ಯಕ್ತಿ. ನನ್ನಲ್ಲಿ ರಾಜ್ಯ ನಡೆಸುವ ಸಾಮರ್ಥ್ಯವಿದೆ. ನಿಮ್ಮ ಈ ವರೆಗಿನ ಸಹಾಯಕ್ಕೆ ವೈಯಕ್ತಿಕವಾಗಿ ಕೃತಜ್ಞಳಾಗಿದ್ದೇನೆ, ಮುಂದೆಯೂ ಆಗಿರುತ್ತೇನೆ. ಆದರೆ ನನ್ನ ಬೆಳವಣಿಗೆಯ ಹಾದಿಯಲ್ಲಿ ನಾನೇ ಹೆಜ್ಜೆ ಇಡುವುದು ಅಗತ್ಯವಿದೆ”.
ಇದಾದ ನಂತರ ಎಂಜಿಆರ್‌ ಬಹಳ ವರ್ಷ ಬದುಕಲಿಲ್ಲ. ಅವರು ಇಲ್ಲವಾದ ಕಾಲಕ್ಕೆ ಅವರ ಹೆಂಡತಿ ಜಾನಕಿ ಅಧಿಕಾರಕ್ಕೆ ಬಂದರು. ಅವರ ವಿರುದ್ಧ ಸೆಟೆದುಬಿದ್ದ ಜಯಾ ಎಂಜಿಆರ್‌ ಮೇಲೆ ತಮಗಿದ್ದ ಹಕ್ಕನ್ನು ಪ್ರತಿಪಾದಿಸುತ್ತಾ ಮತ್ತೊಂದು ಬಣ ಹುಟ್ಟುಹಾಕಿದರು. ಅಪಾರ ಬೆಂಬಲಿಗರೊಂದಿಗೆ ಛಲಕ್ಕೆ ಬಿದ್ದು ಮೂರ್ನಾಲ್ಕು ವರ್ಷಗಳಲ್ಲಿ ಮುಖ್ಯಮಂತ್ರಿಯಾಗಿಯೂ ಬಿಟ್ಟರು.
ಈ ಎಲ್ಲ ಸಂದರ್ಭಗಳಲ್ಲೂ ಅವರ ಜೊತೆಗಿದ್ದರು ಶಶಿಕಲಾ. ಅಧಿಕಾರ ಹಿಡಿದ ನಾಲ್ಕೇ ವರ್ಷಗಳಲ್ಲಿ ಹಗರಣಗಳ ಸರಮಾಲೆ ಜಯಾ ಕೊರಳನ್ನು ಸುತ್ತಿತು. ಅನಂತರದ ಚುನಾವಣೆಗಳಲ್ಲಿ ಹೇವು ಏಣಿಯಾಟ ಆಡಿದರು ಜಯಲಲಿತಾ. ಜಿದ್ದು – ಸೇಡಿನ ರಾಜಕಾರಣಗಳು ನಡೆದವು. ಇವುಗಳ ನಡುವೆ ಒಂದೂವರೆ ಲಕ್ಷ ಅಥಿತಿಗಳಿಗೆ ಉಣಬಡಿಸಿ ತಮ್ಮ ಸಾಕುಮಗನಿಗೆ ಅದ್ದೂರಿಯ ಮದುವೆ ಮಾಡಿ ಗಿನ್ನಿಸ್‌ ಪುಸ್ತಕದಲ್ಲೂ ದಾಖಲೆಯಾದರು ಜಯಲಲಿತಾ.
ವಿಧಾನ ಸಭೆಯಲ್ಲಿ ಕಿಡಿಗೇಡಿಗಳು ಆಕೆಯ ಸೀರೆ ಎಳೆದರೆಂದು ಗೌನ್‌ ಹಾಕಿಕೊಂಡು ಓಡಾಡತೊಡಗಿದರು. ಕರುಣಾನಿಧಿ ಅಧಿಕಾರಕ್ಕೆ ಬಂದಾಗ ತಮ್ಮ ಆಭರಣಗಳನ್ನು ಸೀಜ್‌ ಮಾಡಿದರೆಂದು ಕೋಪಿಸಿಕೊಂಡ ಜಯಾ ಹದಿನಾಲ್ಕು ವರ್ಷಗಳ ಕಾಲ ಆಭರಣವನ್ನ ತೊಟ್ಟಿರಲಿಲ್ಲ! ಅವರು ಮತ್ತೆ ಚಿನ್ನ ಮುಟ್ಟಿದ್ದು ಮತ್ತೆ ಅಧಿಕಾರದ ಗಾದಿ ಏರಿದಾಗಲೇ.
~
ಸ್ವಾಭಿಮಾನ, ಗರ್ವ, ಮಹತ್ವಾಕಾಂಕ್ಷೆ, ಹೊಡೆತಗಳು, ಮೇಲ್ನೋಟದ ಗೆಲುವು ಹಾಗೂ ಅಂತರಂಗದ ಸೋಲುಗಳು, ಪ್ರೇಮದ ಹಪಾಹಪಿ, ಮುಖವಾಡಗಳಲ್ಲೆ ಮುಚ್ಚಿಹೋದ ಮುಖದ ನೋವು – ಈ ಎಲ್ಲವೂ ಯಾವುದೇ ವ್ಯಕ್ತಿಯನ್ನು ವಂಚಕನನ್ನಾಗಿ ರೂಪಿಸುತ್ತದೆ. ಅದರಲ್ಲಿಯೂ ವಂಚನೆಗೊಳಗಾದ, ದಬಾವಣೆಗೊಳಪಟ್ಟ ಹೆಣ್ಣನ್ನು ಹಟಮಾರಿಯನ್ನಾಗಿಸುತ್ತದೆ. ಭ್ರಷ್ಟ ಜಯಲಲಿತಾ ಈ ಎಲ್ಲದರ ಫಲಿತಾಂಶ ಎಂದನ್ನಿಸುತ್ತದೆಯಲ್ಲವೆ?
~
ಅಂದ ಹಾಗೆ, ನಮ್ಮ ನಮ್ಮ ನೆಲೆಗೆ ಅನ್ವಯಿಸಿಕೊಂಡಾಗ ನಾವು ಎಲ್ಲೆಲ್ಲಿ ಭ್ರಷ್ಟರಾಗಿದ್ದೇವೆ? ನಮನಮಗೆ ಸಿಕ್ಕ ಅವಕಾಶಗಳಲ್ಲಿ?

ವೇಶ್ಯಾವಾಟಿಕೆ ಎಂಬ ವೃತ್ತಿ ಮತ್ತು ವಂಚನೆ

ವೇಶ್ಯಾವಾಟಿಕೆ ಭಾರತಕ್ಕೆ ಹೊಸತೇನಲ್ಲ. ಪೌರಾಣಿಕ ಅಪ್ಸರೆಯರ ಕಾಲದಿಂದಲೂ ಈ ಕಾಯಕ ಅಸ್ತಿತ್ವದಲ್ಲಿರುವಂಥದ್ದೇ. ಆದರೆ ಅಂದಿಗೂ ಇಂದಿಗೂ ವೇಶ್ಯಾವಾಟಿಕೆಯ ವಿಷಯ ಬಂದಾಗ ಅದರಲ್ಲಿ ತೊಡಗಿರುವ ಹೆಣ್ಣಿಗೇ ಕಳಂಕ ಮೆತ್ತುವುದು ನಮ್ಮ’ಸಂಸ್ಕೃತಿ’ಯ ಪರಿಪಾಠ. ಇಂಥದೊಂದು ಕಾಯಕ ಗಂಡಸಿನದೇ ಸೃಷ್ಟಿ. ತಾನು ಅನುಭೋಗಿಸಲು ತನ್ನ ಸಂಸಾರದಾಚೆಗಿನ ಒಂದು ಹೆಣ್ಣು ಬೇಕಾದ ಸಂದರ್ಭದಲ್ಲಿ ಆತ ವೇಶ್ಯಾವಾಟಿಕೆಯನ್ನು ಹುಟ್ಟು ಹಾಕಿದ. ಪೌರಾಣಿಕ ಇಂದ್ರಾದಿಗಳು ತಮ್ಮ ಸ್ವರ್ಗ ಲೋಕದ ವಿಸಿಟ್‌ಗೆ ಬರುವ ಋಷಿಮುನಿಗಳು, ರಾಜಾಧಿರಾಜರ ‘ಮನರಂಜನೆ’ಗೆ ಅಪ್ಸರೆಯರನ್ನು ನೇಮಿಸಿ ‘ಸಕಲ ಸೇವೆ’ಗೆ ಬಿಡುತ್ತಿದ್ದಂತೆಯೇ ನಮ್ಮ ನೆಲದಲ್ಲೂ ಸ್ವಂತ ದೇಹದ ತಣಿವಿಗೆ, ಅಥಿತಿ ಸತ್ಕಾರಕ್ಕೆ, ರಾಜಕಾರಣಕ್ಕೆ, ವ್ಯವಹಾರಕ್ಕೆ ಕೊನೆಗೆ ದೇವರ ಸೇವೆಗೂ ಹೆಣ್ಣು ಬೇಕಾಗಿ ‘ನಗರ ವಧು’ಗಳನ್ನೂ ‘ದೇವದಾಸಿ’ಯರನ್ನೂ ಸೃಷ್ಟಿ ಮಾಡಿ, ವೇಶ್ಯಾವಾಟಿಕೆ ಕಾಯಕಕ್ಕೆ ನಾಂದಿ ಹಾಡಿದ್ದು ಹೆಣ್ಣನ್ನು ಕೇವಲ ಭೋಗ ವಸ್ತುವಾಗಿ ಕಂಡ ಪುರುಷ ಸಮುದಾಯವೇ. ಹೀಗಿರುವಾಗ ನಮ್ಮ ಸಮಾಜ ವೇಶ್ಯಾವಾಟಿಕೆಗೆ ಹಚ್ಚಿದ ಗಂಡಸರನ್ನು ‘ವೀರ್ಯವಂತ’ರಂತೆ ಕಂಡು, ಅದರ ಕಾಯಕಕ್ಕಿಳಿದ ಹೆಂಗಸರನ್ನು ಹೀನವಾಗಿ ಕಾಣುತ್ತ ಆ ಒಂದು ಸಮುದಾಯವನ್ನೆ ದೂರವಿಡುತ್ತ ಬಂದಿರುವುದು ಮನುಷ್ಯ ಸಮುದಾಯದ ದೊಡ್ಡ ವ್ಯಂಗ್ಯ. ಬೇಕಿದ್ದರೆ ಗಮನಿಸಿ. ವೇಶ್ಯೆಯರ ಸಹವಾಸ ಮಾಡುವ ಗಂಡಸನ್ನು ಆತನ ಕುಟುಂಬದವರು ಹೇಗೋ ಸಹಿಸಿಕೊಂಡುಬಿಡುತ್ತಾರೆ. ಊರಿನಲ್ಲಿ ಅದು ಆತನ ಪ್ರತಿಷ್ಠೆಯ ಸಂಗತಿಯಾಗಿರುತ್ತದೆ. ಅದೇ ಆತನಿಗೆ ಒದಗುವ ವೇಶ್ಯೆಯನ್ನು ಆಕೆಯ ಕುಟುಂಬ ಮನೆಯೊಳಗೂ ಇಟ್ಟುಕೊಂಡಿರುವುದಿಲ್ಲ. ವಾಸ್ತವದಲ್ಲಿ ಆಕೆಗೊಂದು ಸಂಸಾರ ಎಂಬುದೇ ಉಳಿದಿರುವುದಿಲ್ಲ. ಊರಿನಲ್ಲಂತೂ ಅಂಥವಳಿಗೆ ಬಹಿಷ್ಕಾರವೇ ಸರಿ. ಇಂಥದೊಂದು ಸಾಮುದಾಯಿಕ ಮನಸ್ಥಿತಿ ಹುಟ್ಟಿಕೊಂಡಿದ್ದು ಹೇಗೆ? ವೇಶ್ಯಾವಾಟಿಕೆಯೇ ಒಂದು ಅನೈತಿಕ ಸಂಗತಿ ಎಂದಾದಲ್ಲಿ, ಅದರಲ್ಲಿ ತೊಡಗುವ ಗಂಡು ಮತ್ತು ಹೆಣ್ಣುಗಳಿಬ್ಬರೂ ಸಮಾನ ದೋಷಿಗಳಾಗಬೇಕಿತ್ತು. ರೈಡ್‌ಗಳಾದಾಗ ಸೆರೆಮನೆಗಟ್ಟುವ ಕಾನೂನಿನ ಹೊರತಾಗಿ, ಸಾಮಾಜಿಕವಾಗಿ ಯೋಚಿಸುವಾಗ ಪರಿಣಾಮದಲ್ಲಿ ವ್ಯತ್ಯಾಸವಾಗಲು ಕಾರಣವೇನು? ಎಲ್ಲಕ್ಕಿಂತ ಮುಖ್ಯ ಪ್ರಶ್ನೆ, ವೇಶ್ಯೆಯರ ಜೊತೆ ಸಂಪರ್ಕ ಬೆಳೆಸುವವರು ಸಮಾಜದಲ್ಲಿ ಎಲ್ಲರ ಜೊತೆ ಕುಳಿತೆದ್ದು ಗೌರವ ಪಡೆದುಕೊಂಡೇ ಇರುತ್ತಾರೆ. ಆದರೆ ಇದರಲ್ಲಿ ತೊಡಗಿದ ಹೆಣ್ಣುಗಳಿಗೆ ಮಾತ್ರ ಅಂತಹ ಗೌರವವನ್ನೂ ಸಮಾನತೆಯನ್ನೂ ನಿರಾಕರಿಸಲಾಗುತ್ತದೆ. ಈ ತಾರತಮ್ಯ ಹುಟ್ಟುಹಾಕಿದ್ದರ ಹಿನ್ನೆಲೆಯನ್ನು ಅರಿತರೆ ಪುರುಷನ ಸ್ವಾರ್ಥ ಕಣ್ಣಿಗೆ ರಾಚುತ್ತದೆ.

ಗಂಡಸರ ತೀರ್ಪುಗಳಿಂದ ಹೊರಬಂದು ಯೋಚಿಸಿದಾಗ ಹೆಣ್ಣು ಯಾವತ್ತಿಗೂ ಹೆಣ್ಣಿಗೆ ಶತ್ರುವಾಗಿರುವುದಿಲ್ಲ. ಗಂಡಸು ತನ್ನ ಬೇಳೆ ಬೇಯಿಸಿಕೊಳ್ಳಲಿಕ್ಕಾಗಿ ಎರಡು ಹೆಣ್ಣುಗಳ ನಡುವೆ ವೈಮನಸ್ಯ ತಂದಿಡುತ್ತಾನೆ. ಅದು ತನ್ನ ಹೆಂಡತಿ ಹಾಗೂ ಪ್ರೇಯಸಿಯ ನಡುವೆಯೇ ಇರಬಹುದು, ಹೆಂಡತಿ ಹಾಗೂ ತಾಯಿ ಅಥವಾ ಸಹೋದರಿಯರ ನಡುವೆಯೇ ಇರಬಹುದು. ಆತನಿಗೆ ಹೆಣ್ಣುಗಳ ಒಗ್ಗಟ್ಟಿನ ಬಲದ ಅರಿವು ಇರುವುದರಿಂದಲೇ ಅವರನ್ನು ಸಾಧ್ಯವಾದಷ್ಟು ದೂರ ಇಡಲು ಸಾಹಸಪಡುತ್ತಾನೆ. ವೇಶ್ಯೆಯರ ವಿಷಯದಲ್ಲಿಯೂ ಆಗಿದ್ದು ಹೀಗೇ. ನಮ್ಮದೇ ಹಿಂದೆರಡು ತಲೆಮಾರುಗಳನ್ನು ಕೆದಕಿ ನೋಡಿದರೆ ನಮ್ಮ ಮುತ್ತಜ್ಜಿಯರು ಅವರ ಗಂಡಂದಿರ ‘ಚಿಕ್ಕ ಮನೆ’ಗೆ ಸಹಾಯ ಮಾಡುತ್ತಿದ್ದುದು ಕಂಡುಬರುತ್ತದೆ. ವೇಶ್ಯೆ ಅನ್ನಿಸಿಕೊಂಡವಳನ್ನು ಹೊರಬಾಯಲ್ಲಿ ದೂರಿದರೂ ಅಂತರಂಗದಲ್ಲಿ ಆಕೆಯ ಬಗೆಗೊಂದು ಮೃದು ಭಾವನೆ ಇದ್ದುದು ಎದ್ದು ತೋರುತ್ತದೆ. ಹಾಗೆಂದೇ ಗಂಡಸರ ಎಷ್ಟೆಲ್ಲ ಕಟ್ಟುನಿಟ್ಟಿನ ನಡುವೆಯೂ ಗೃಹಿಣಿಯರು ಕೆಲವು ಪೂಜೆ ಪುನಸ್ಕಾರಗಳಿಗೆ ವೇಶ್ಯೆಯರನ್ನು ಕರೆಸುವ ರೂಢಿ ಹುಟ್ಟುಹಾಕಿಕೊಂಡಿದ್ದರು. ಕ್ರಿಸ್ತ ಪೂರ್ವ ಎರಡನೇ ಶತಮಾನದ ಕಾಲದಲ್ಲೇ ಶೂದ್ರಕ ಎಂಬ ನಾಟಕಕಾರನು ತನ್ನ ಮೃಚ್ಛಕಟಿಕ ನಾಟಕದಲ್ಲಿ ಇಂಥ ಸನ್ನಿವೇಶಗಳನ್ನು ಪರಿಣಾಮಕಾರಿಯಾಗಿ ದಾಖಲಿಸಿದ್ದಾನೆ. ಗಂಡಸಿನ ಮಟ್ಟಿಗೆ ಲೈಂಗಿಕತೆ ಕೇವಲ ಲಿಂಗ ಸಂಬಂಧಿಯಲ್ಲ. ಅದು ಕೇವಲ ಅಂಗವೊಂದರ ಅನಿವಾರ್ಯತೆ ಅಲ್ಲ. ಅದು ಆತನ ಪ್ರತಿಷ್ಠೆಯ, ಮೇಲರಿಮೆಯ, ಧೀರತನದ ಪ್ರಶ್ನೆ. ಅದು ಅಪ್ಪಟ ಪುರುಷ ಧೋರಣೆ. ಇಂತಹ ಧೋರಣೆಯ ಗಂಡಸರು ತಮ್ಮ ವಿವಾಹೇತರ ಸಂಬಂಧಕ್ಕೆ ಪತ್ನಿಯ ಸಮ್ಮತಿ ದೊರಕಿಬಿಟ್ಟರೆ ಅದರ ಸ್ವಾರಸ್ಯ ಕಳೆದುಕೊಂಡುಬಿಡುತ್ತಾರೆ. ಅವರು ವಿದ್ರೋಹದಲ್ಲೆ ಸುಖಿಸುವವರು. ಆದ್ದರಿಂದಲೇ ಅಂಥವರಿಗೆ ವೇಶ್ಯಾವಾಟಿಕೆಗೆ ಮುಕ್ತವಿರುವ ಕೆಂಪುದೀಪ ಅಥವಾ ಸೋನಾಕಾಚಿ ಸಾಕಾಗುವುದಿಲ್ಲ. ನಗರದ ನಡುವೆಯೇ ಕದ್ದುಮುಚ್ಚಿ ವೇಶ್ಯೆಯರ ಸಹವಾಸ ಮಾಡುವುದರಲ್ಲಿ ಅವರಿಗೆ ಹೆಚ್ಚಿನ ತೃಪ್ತಿ ದೊರಕುತ್ತದೆ. ದೇಹ ತೃಪ್ತಿಗೊಳಿಸಲು ಮತ್ತೊಂದು ದೇಹ ಸಾಕು. ಅದರ ಜೊತೆಗೆ ಅಹಂಕಾರವೂ ತೃಪ್ತಿಗೊಳ್ಳಬೇಕೆಂದರೆ ಭಾರೀ ಸವಾಲುಗಳೇ ಇರಬೇಕು! ಬಹುಶಃ ಈ ಕಾರಣದಿಂದಲೇ ವೇಶ್ಯಾವಾಟಿಕೆಯನ್ನು ಸೃಷ್ಟಿಸಿದ ಗಂಡಸು ಅದನ್ನು ನೈತಿಕತೆಯ ಹೊರಗಿಟ್ಟು ‘ಸಮಾಜ ಬಾಹಿರ’ವೆಂದು ಘೋಷಿಸಿದ್ದು.

ಹೆಚ್ಚೂಕಡಿಮೆ ಮದುವೆ ಅನ್ನುವ ಕಟ್ಟುಪಾಡು ಹುಟ್ಟಿಕೊಂಡ ಆಜೂಬಾಜು ಅವಧಿಯಲ್ಲೇ ವೇಶ್ಯಾವಾಟಿಕೆ ಎಂಬ ಕಾಯಕವೂ ಹುಟ್ಟಿಕೊಂಡಿದೆ. ಒಂದು ರೀತಿಯಿಂದ ನೋಡಿದರೆ ಇದು ಜಗತ್ತಿನಲ್ಲೇ ಅತ್ಯಂತ ಪುರಾತನ ಉದ್ಯೋಗ. ಹೆಣ್ಣಿನ ದೃಷ್ಟಿಯಿಂದ ನೋಡುವಾಗ ಈ ಕಾಯಕಕ್ಕೆ ‘ಉದ್ಯೋಗ’ ಎನ್ನುವ ಮನ್ನಣೆ ನೀಡುವ ಅಗತ್ಯವಿದೆ. ಗಂಡಿನ ನಿಟ್ಟಿನಲ್ಲಿ ಇದೊಂದು ವಂಚನಾಜಾಲ. ಏಕೆಂದರೆ ಯಾವ ಹೆಣ್ಣೂ ತಾನಾಗಿಯೇ ಬಯಸಿ ವೇಶ್ಯಾವಾಟಿಕೆಗೆ ಇಳಿಯುವುದಿಲ್ಲ. ಒಬ್ಬ ಹೆಣ್ಣು ಈ ವೃತ್ತಿಗೆ ಇಳಿಯಬೇಕು ಎಂದಾದರೆ, ಅವಳ ದೇಹವನ್ನು ‘ಖರೀದಿಸುವ’ ಒಬ್ಬ ಗಿರಾಕಿ ಇರಲೇ ಬೇಕಾಗುತ್ತದೆ. ಮತ್ತು ದೇಹ ಮಾರುವವಳ ಹಾಗೂ ಕೊಳ್ಳುವವನ ನಡುವೆ ದಲ್ಲಾಳಿಗಳೂ ಬೇಕಾಗುತ್ತಾರೆ. ಈ ದಲ್ಲಾಳಿಗಳು ಹಣ ಮಾಡುವ ದುರುದ್ದೇಶದಿಂದ ಹೆಣ್ಣು ಕದಿಯುವ ಹೀನ ಕೆಲಸಕ್ಕೆ ಕೈಹಾಕುತ್ತಾರೆ. ಆಗ ವೇಶ್ಯಾವಾಟಿಕೆಯ ಕ್ರೂರ ಅಧ್ಯಾಯಗಳು ತೆರೆದುಕೊಳ್ಳುತ್ತವೆ. ಇಂದು ಈ ವೃತ್ತಿ ಭೂಮಿಯ ಮೇಲಿನ ಅತ್ಯಂತ ಹೊಲಸು ವೃತ್ತಿಯಾಗಿ ಪರಿಣಮಿಸಿರುವುದು ಈ ದಲ್ಲಾಳಿಗಳಿಂದಲೇ. ಲೋಭಿಗಳಾದ ಇವರು ಅಸಹಾಯಕ ಪರಿಸ್ಥಿತಿಯಲ್ಲಿರುವ ಹೆಣ್ಣುಗಳನ್ನು ವೇಶ್ಯಾವಾಟಿಕೆಗೆ ಸೆಳೆಯುತ್ತಾರೆ. ಚಿಕ್ಕ ಮಕ್ಕಳೂ ಬಿಡದಂತೆ ಹೆಣ್ಣುಗಳನ್ನು ಅಪಹರಿಸುವ ಧಂಧೆಗೆ ಕೈಹಾಕುತ್ತಾರೆ. ಕೆಲವರು ಬಡ ತಾಯ್ತಂದೆಯರಿಂದಲೋ ಸಂಬಂಧಿಗಳಿಂದಲೋ ದುಡ್ಡು ತೆತ್ತು ಖರೀದಿಸಿ ತರುವುದೂ ಇದೆ. ಆದ್ದರಿಂದ ‘ವೇಶ್ಯಾವಾಟಿಕೆ’ಯ ಮಾತು ಬಂದಾಗ ಅದರಲ್ಲಿ ತೊಡಗಿರುವ ಹೆಣ್ಣು ಕೇವಲ ಸಲಕರಣೆಯಾಗಿರುತ್ತಾಳೆ ಅನ್ನುವುದನ್ನು ನೆನಪಿನಲ್ಲಿಡಬೇಕು. ಆಕೆ ತನ್ನ ವೃತ್ತಿ ಮಾಡುತ್ತಿರುವಳಷ್ಟೇ. ಆ ವೃತ್ತಿಯನ್ನು ಕಲ್ಪಿಸಿದವರು, ಅದರ ಸೇವೆ ಹಾಗೂ ಲಾಭಗಳನ್ನು ಪಡೆಯುತ್ತಿರುವವರು ಇಲ್ಲಿ ನಿಜವಾದ ದೋಷಿಗಳಾಗಿರುತ್ತಾರೆ.

ಇತ್ತೀಚೆಗೆ ಲೈಮ್‌ಲೈಟ್‌ ಹೆಣ್ಣುಮಕ್ಕಳು ಮತ್ತೆ ಸೆಕ್ಸ್‌ ರಾಕೆಟ್‌ನಲ್ಲಿ ಸುದ್ದಿಯಾಗುತ್ತಿದ್ದಾರೆ. ಆಗಿಂದಾಗ ಇಂಥ ಪ್ರಕರಣಗಳು ಸದ್ದು ಮಾಡಿ ಆ ಎಲ್ಲ ಹೆಣ್ಣುಮಕ್ಕಳ ಹೆಸರುಗಳು ನೆನಪಲ್ಲಿ ಉಳಿಯುವಂತಾಗಿದೆ. ಆಶ್ಚರ್ಯವೆಂದರೆ, ಅವರು ಯಾರಿಗಾಗಿ ಆ ಕೆಲಸ ಮಾಡುತ್ತಿದ್ದರು, ಹಿಡಿಯಲ್ಪಟ್ಟಾಗ ಯಾರ ಜೊತೆ ಇದ್ದರು ಅನ್ನುವುದೆಲ್ಲ ಇವತ್ತಿಗೂ ತೆರೆಮರೆಯಲ್ಲೇ ಇರುವುದು! ಇತ್ತೀಚಿನ ಶ್ವೇತಾ ಬಸು ಪ್ರಸಾದ್‌ ಪ್ರಕರಣದಲ್ಲಂತೂ ಈ ತಾರತಮ್ಯ ಅಸಹ್ಯವೆನ್ನಿಸುವಷ್ಟು ಪ್ರಮಾಣದಲ್ಲಿದೆ. ಸ್ಟಿಂಗ್‌ ಆಪರೇಷನ್ ನಡೆಸಿದ ಮಂದಿ ಆಕೆಯ ಫೋಟೋ ಮತ್ತು ಹೆಸರನ್ನು ಬೊಬ್ಬಿರಿದು ಪ್ರಚಾರ ಮಾಡಿದರೇ ಹೊರತು, ಅವರೊಂದಿಗೆ ಇದ್ದವರು ಯಾರು ಅನ್ನುವ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಈತನಕದ ಮಾಹಿತಿಯಂತೆ ಶ್ವೇತಾ ಪೊಲೀಸರ ಬಳಿ ತಮ್ಮ ಹೈಪ್ರೊಫೈಲ್ಡ್‌ ಗಿರಾಕಿಗಳ ಹೆಸರನ್ನು ಹೇಳಿಕೊಂಡಿದ್ದಾರೆ. ಆದರೆ ಮುಂದೆ ನ್ಯಾಯಾಲಯದಲ್ಲೂ ಅವರು ಬಹಿರಂಗಪಡಿಸುತ್ತಾರಾ ಅನ್ನುವ ಖಾತ್ರಿ ಇಲ್ಲ. ಏಕೆಂದರೆ ಶ್ವೇತಾ ಗಿರಾಕಿಗಳ ಲಿಸ್ಟಿನಲ್ಲಿ ಚಿತ್ರ ನಟರು, ರಾಜಕಾರಣಿಗಳು, ಉದ್ಯಮಿಗಳು ಹೀಗೆ ಭಾರೀ ಜನರೇ ಇದ್ದಾರೆಂಬ ಊಹೆಯಿದೆ. ಅವರೆಲ್ಲರ ಪ್ರಭಾವದಿಂದ ಈ ಪ್ರಕರಣ ಆಕೆಯ ಹೆಸರಿಗೊಂದು ಕಪ್ಪು ಚುಕ್ಕೆ ಇಟ್ಟು ಮುಗಿದುಹೋಗುತ್ತದೆಯಾ ಅನ್ನುವ ಅನುಮಾನವೂ ಇದೆ. ಇಲ್ಲಿ ಏನು ಬೇಕಾದರೂ ಆಗಬಹುದು. ಏಕೆಂದರೆ ಇದು ಗಂಡು ಪ್ರಾಬಲ್ಯದ ಜಗತ್ತು. ಇಲ್ಲಿ ಇತಿಹಾಸ ನಿರ್ಮಿಸಿದವರು ಯಾರೇ ಇದ್ದರೂ ಬರೆಯುವವರು ಮಾತ್ರ ಅವರೇ. ಅಪರಾಧ, ನೈತಿಕತೆ ಎಲ್ಲದರ ಮಾನದಂಡವನ್ನು ನಿರ್ಧರಿಸುವವರೂ ಅವರೇ. ವೇಶ್ಯಾವಾಟಿಕೆಯ ಕಪ್ಪುಕುಳಿಯನ್ನು ತೋಡಿ ಹೆಣ್ಣುಗಳನ್ನು ಅದರಾಳಕ್ಕೆ ದೂಕುತ್ತಾ, ಜಾರಿ ಬಿದ್ದ ‘ಜಾರಿಣಿ’ ಎಂದು ದೂಷಿಸುವ ಈ ಸಹಜೀವಿಗಳ ಅಂತರಂಗದಲ್ಲಿ ಹೆಣ್ತನ ಚಿಗುರಿದ ಕಾಲಕ್ಕಷ್ಟೆ ಎಲ್ಲವೂ ಬದಲಾಗಬಹುದೆಂಬ ಆಶಯ ಕೊನೆಗೆ.

ಗಂಡಸು ಮಾತ್ರ ಮಾಡಬಹುದಾದ ವಿಕೃತಿ ಮತ್ತು ಹೆಣ್ಣು ಮಾತ್ರ ಅನುಭವಿಸಬಹುದಾದ ಸಂಕಟ….

ಗಂಡಸು ಮಾಡುವ ಲೈಂಗಿಕ ಶೋಷಣೆ ಹೆಣ್ಣಿನ ಪಾವಿತ್ರ‍್ಯಕ್ಕೆ ಹಾನಿ ಎಸಗಲು ಸಾಧ್ಯವಿಲ್ಲ, ಇಷ್ಟಕ್ಕೂ ಹೆಣ್ಣಿನ ಅಸ್ಮಿತೆಯನ್ನು ಕದಡಲು ಗಂಡಸಿಗೆ ಯಾವ ರೀತಿಯ ಅರ್ಹತೆಯಾಗಲೀ ಸಾಮರ್ಥ್ಯವಾಗಲೀ ಇಲ್ಲ ಅನ್ನುವ ಮಾತನ್ನ ಮನದಟ್ಟು ಮಾಡುವ ಅಗತ್ಯ ಎಲ್ಲಕ್ಕಿಂತ ಮೊದಲು ಇದೆ. ಮತ್ತು ಅತ್ಯಾಚಾರ ಪ್ರಕರಣಗಳನ್ನು ತಗ್ಗಿಸಲು ಇರುವ ಎರಡನೇ ವಿಧಾನ ಕಠಿಣ ಶಿಕ್ಷೆ. ಕಠಿಣ ಅನ್ನುವುದಕ್ಕಿಂತ ಅವಮಾನಕರ ಶಿಕ್ಷೆ. ಅಥವಾ ಒಂದು ಕೆಲಸ ಮಾಡಬಹುದು. ಇದು ಮನಸು ಗಿನಸಿನದಲ್ಲ, ಪೂರಾ ಲೈಂಗಿಕ ಸಂಗತಿಯೇ ಅನ್ನುವ ಹಾಗಿದ್ದರೆ – ಬೀದಿಬೀದಿಯಲ್ಲಿ ಸುಲಭ ಶೌಚಾಲಯಗಳಿರುವ ಹಾಗೆಯೇ ‘ಈಸಿ ಫಕ್ ಸೆಂಟರ್‌’ಗಳನ್ನ ಸ್ಥಾಪಿಸಬಹುದು. ಚೀನಾದಿಂದ ಏನೇನೋ ತರಿಸುತ್ತಿರುವಂತೆಯೇ ಸೆಕ್ಸ್‌ ಡಾಲ್‌ಗಳನ್ನ ತರಿಸಿ ಇಡಬಹುದು. ಹಳ್ಳಿ, ಪಟ್ಟಣ, ನಗರಗಳಲ್ಲಿ ಈ ವ್ಯವಸ್ಥೆ ಇರುವಂತಾಗಬೇಕು. ಸರ್ಕಾರಗಳಿಗೆ ಕೊಂಚ ಹಣ ಖರ್ಚಾಗುತ್ತದೆ. ಅಂಥವರ ನರದೌರ್ಬಲ್ಯಕ್ಕೆ ಬಲಿಯಾಗುವ ಹೆಣ್ಣುಗಳ ಜೀವಕ್ಕಿಂತ ಅದು ಹೆಚ್ಚೇನಲ್ಲ.

ಪ್ರತಿಸಲವೂ (ನಾನು) ಬೇಸರ, ನೋವು, ಹತಾಶೆ, ತಾತ್ಸಾರಗಳಿಂದ ’ಗಂಡಸು’ ಅಂತ ಬರೆವಾಗ ಅಲ್ಲಿ ಬುದ್ಧಿ, ಮೆದುಳು, ಹೃದಯಾದಿ ಅಂತಃಕರಣದಿಂದ ಯೋಚಿಸುವ ಹಾಗೂ ನಡೆದುಕೊಳ್ಳುವ ‘ಮನುಷ್ಯ’ ಇರುವುದಿಲ್ಲ. ಬದಲಿಗೆ, ಕೇವಲ ತನ್ನ ಲಿಂಗ ಮತ್ತು ಅದರ ವಿಕೃತ ಸಾಧ್ಯತೆಗಳಿಂದಷ್ಟೆ ಯೋಚಿಸುವ ಜೀವಿ ಇರುತ್ತಾನೆ. ಇದು ಬರೀ ಲೈಂಗಿಕತೆಗೆ ಸಂಬಂಧಿಸಿದ ದುರಹಂಕಾರವಲ್ಲ. ಅದರ ಮೂಲಕ ತಾನು ಉಂಟು ಮಾಡುವ ದಬ್ಬಾಳಿಕೆ ಕೂಡ.
ಕೋಮು ದ್ವೇಷ, ಜಾತೀಯ ಮೇಲರಿಮೆ, ಹಣದ ಮದ, ರಾಜಕಾರಣ – ಇದೇನೇ ಇದ್ದರೂ ಗಂಡಸು ತನ್ನ ಎದುರಾಳಿ ಹೆಣ್ಣಿನ ‘ಕೊಬ್ಬು ಇಳಿಸಲು’ ಬಳಸುವ ಸುಲಭ ತಂತ್ರ ಇದೊಂದೇ ಆಗಿರುತ್ತದೆ. ಲೈಂಗಿಕವಾಗಿ ಹೆಣ್ಣಿನ ಮೇಲೆರಗುವುದು ಅವನ ಪಾಲಿಗೆ ಅವನು ವಿಧಿಸುವ ‘ಶಿಕ್ಷೆ’. ಆತ ಹೆಣ್ಣಿಗೆ ಮಾಡುವ ‘ಶಾಸ್ತಿ’. ಗಂಡಸು ಅತ್ಯಾಚಾರ ಮಾಡುತ್ತಾನೆಂದರೆ ಅಲ್ಲಿ ಕೇವಲ ಲೈಂಗಿಕ ವಾಂಛೆ ಇರುವುದಿಲ್ಲ. ತೀರ ಕೆಟ್ಟದಾಗಿ ಮಾತಾಡಬೇಕಾಗುತ್ತದೆ ಕೆಲ ಸಾರ್ತಿ – ಅಂತಹ ಹಸಿವನ್ನು ತಣಿಸಿಕೊಳ್ಳಲೇಬೇಕು ಅಂತಿದ್ದರೆ ಒಂದು ಚಿಕ್ಕ ರಂಧ್ರ ಸಾಕಾಗುತ್ತದೆ, ಹೆಣ್ಣು ಬೇಕೆಂದೇನಿಲ್ಲ. ಅವನು ತನ್ನ ದುರಹಂಕಾರದ ತೃಪ್ತಿಗಾಗಿ, ತನ್ನ ಮದವನ್ನು ತಾನು ಸಾಬೀತುಪಡಿಸಿಕೊಳ್ಳಲಿಕ್ಕಾಗಿಯಷ್ಟೆ ಅತ್ಯಾಚಾರ ಎಸಗುವುದು. ಅದು ಆತನ ಲೈಂಗಿಕ ವಿಕೃತಿಯಲ್ಲ, ಮಾನಸಿಕ ವಿಕೃತಿ. ಆತ್ಮ ವಿಕೃತಿಯಷ್ಟೆ.
ಗಂಡಸು ಮಾಡುವ ಲೈಂಗಿಕ ಶೋಷಣೆ ಹೆಣ್ಣಿನ ಪಾವಿತ್ರ‍್ಯಕ್ಕೆ ಹಾನಿ ಎಸಗಲು ಸಾಧ್ಯವಿಲ್ಲ, ಇಷ್ಟಕ್ಕೂ ಹೆಣ್ಣಿನ ಅಸ್ಮಿತೆಯನ್ನು ಕದಡಲು ಗಂಡಸಿಗೆ ಯಾವ ರೀತಿಯ ಅರ್ಹತೆಯಾಗಲೀ ಸಾಮರ್ಥ್ಯವಾಗಲೀ ಇಲ್ಲ ಅನ್ನುವ ಮಾತನ್ನ ಮನದಟ್ಟು ಮಾಡುವ ಅಗತ್ಯ ಎಲ್ಲಕ್ಕಿಂತ ಮೊದಲು ಇದೆ. ಮತ್ತು ಅತ್ಯಾಚಾರ ಪ್ರಕರಣಗಳನ್ನು ತಗ್ಗಿಸಲು ಇರುವ ಎರಡನೇ ವಿಧಾನ ಕಠಿಣ ಶಿಕ್ಷೆ. ಕಠಿಣ ಅನ್ನುವುದಕ್ಕಿಂತ ಅವಮಾನಕರ ಶಿಕ್ಷೆ. ಅಥವಾ ಒಂದು ಕೆಲಸ ಮಾಡಬಹುದು. ಇದು ಮನಸು ಗಿನಸಿನದಲ್ಲ, ಪೂರಾ ಲೈಂಗಿಕ ಸಂಗತಿಯೇ ಅನ್ನುವ ಹಾಗಿದ್ದರೆ – ಬೀದಿಬೀದಿಯಲ್ಲಿ ಸುಲಭ ಶೌಚಾಲಯಗಳಿರುವ ಹಾಗೆಯೇ ‘ಈಸಿ ಫಕ್ ಸೆಂಟರ್‌’ಗಳನ್ನ ಸ್ಥಾಪಿಸಬಹುದು. ಚೀನಾದಿಂದ ಏನೇನೋ ತರಿಸುತ್ತಿರುವಂತೆಯೇ ಸೆಕ್ಸ್‌ ಡಾಲ್‌ಗಳನ್ನ ತರಿಸಿ ಇಡಬಹುದು. ಹಳ್ಳಿ, ಪಟ್ಟಣ, ನಗರಗಳಲ್ಲಿ ಈ ವ್ಯವಸ್ಥೆ ಇರುವಂತಾಗಬೇಕು. ಸರ್ಕಾರಗಳಿಗೆ ಕೊಂಚ ಹಣ ಖರ್ಚಾಗುತ್ತದೆ. ಅಂಥವರ ನರದೌರ್ಬಲ್ಯಕ್ಕೆ ಬಲಿಯಾಗುವ ಹೆಣ್ಣುಗಳ ಜೀವಕ್ಕಿಂತ ಅದು ಹೆಚ್ಚೇನಲ್ಲ.

ಮರಕ್ಕೆ ಗೋಣು ತೂಗಿಸಿಕೊಂಡು ನೇತಾಡುತ್ತಿರುವ ಅಕ್ಕ ತಂಗಿಯರ ಶವದ ಚಿತ್ರಗಳನ್ನು ನೋಡಿ ಅಸಹನೀಯ ನೋವು. ಕೇವಲ ಹೆಣ್ಣು ಅನ್ನುವ ಕಾರಣಕ್ಕೆ ಅನುಭವಿಸುವ ಯಾತನೆ. ಯಾವ ಹೊತ್ತು ಯಾವ ಗಂಡಸು ಹೇಗೆ ನಡೆದುಕೊಳ್ಳುತ್ತಾನೆ ಅನ್ನುವ ಆತಂಕದಲ್ಲಿ ಕಾಲ ತಳ್ಳಬೇಕು. ಎರಡು ತಿಂಗಳ ಹಿಂದೆ ಓದಿದ್ದ ಒಂದು ವರದಿ ಇನ್ನೂ ಕಾಡುತ್ತಲೇ ಇರುವಾಗ ಈ ಮತ್ತೊಂದು ಸುದ್ದಿ. ಉತ್ತರ ಭಾರತದ ಕೆಲ ಹಳ್ಳಿಗಳಲ್ಲಿ ಅಪ್ಪಂದಿರೇ ಹೆಣ್ಣುಮಕ್ಕಳನ್ನ ಲೈಂಗಿಕವಾಗಿ ಬಳಸಿಕೊಳ್ಳುವ ಬಗ್ಗೆ…. ತಾಯಂದಿರಿಗೆ ಇದು ಗೊತ್ತಿದ್ದೂ ಎದುರಾಡಲಾಗದ, ಮಗಳನ್ನು ರಕ್ಷಿಸಲಾಗದ ಅಸಹಯಾಕತೆಯ ಬಗ್ಗೆ… ಇನ್ನೂ ಮುಂದುವರೆದು ಕೆಲವರು ಅದನ್ನು ಒಪ್ಪಿಕೊಂಡು ಮಗಳನ್ನೇ ಸವತಿಯಾಗಿ ಕಾಣುವ ಬಗ್ಗೆ….

ಗೆಳತಿ ಹೇಳಿದ್ದ ಮತ್ತೂ ಒಂದು ಘಟನೆ ನೆನಪಾಗುತ್ತಿದೆ… ದಕ್ಷಿಣ ಕನ್ನಡದಲ್ಲಿ ನಡೆದಿದ್ದು. ಆ ಹುಡುಗಿಯ ಮೇಲೆ ಲೈಂಗಿಕ ಶೋಷಣೆ ನಡೆಸಿ ಮರಕ್ಕೆ ನೇತು ಹಾಕಿ, ಕೊಂಬೆಯಲ್ಲಿದ್ದ ಜೇನು ಗೂಡಿಗೆ ಕಲ್ಲು ಹೊಡೆದು ಆಕೆ ನರಳಿ ಸಾಯುವಂತೆ ಮಾಡಿದ್ದರಂತೆ! ಇದು ಸುದ್ದಿಯಿರಲಿ, ಸದ್ದೂ ಆಗಲಿಲ್ಲ. ಸಾಮಾನ್ಯ ಕುಟುಂಬ, ಮಾತಾಡಲೂ ಭಯಪಟ್ಟು ಸುಮ್ಮನೆ ಉಳಿದಿದೆ. ಅತ್ಯಾಚಾರ ಅಂದ ಕೂಡಲೆ ಎಳುವ ವಾದ ವಿವಾದಗಳು ಅಸಹ್ಯ ಹುಟ್ಟಿಸುತ್ತವೆ. ಹೆಣ್ಣುಮಕ್ಕಳ ಬಟ್ಟೆ, ನಡೆನುಡಿಗಳ ಬಗ್ಗೆ ಭಾಷಣಗಳಾಗುತ್ತವೆ. ಈ ಎಲ್ಲ ಹರಟುವ ಸಂಸ್ಕೃತಿ ವಕ್ತಾರರಿಗೆ ಹೇಳಬೇಕು, ನಮ್ಮ ಪುರಾಣಗಳನ್ನು ಓದಲು. ಗಂಡಸಿನೊಟ್ಟಿಗೇ ಆತನ ಈ ವಿಕೃತಿಯೂ ಹುಟ್ಟಿಕೊಂಡಿದೆ. ಗರತಿಯಾಗಿದ್ದ ತುಳಸಿಯ ಪಾವಿತ್ರ‍್ಯವನ್ನು ಸ್ವತಃ ಭಗವಂತ ಅನ್ನಿಸಿಕೊಂಡವನು ಕೆಡಿಸುವ ಕಥೆಯೇ ನಮ್ಮಲ್ಲಿ ಇಲ್ಲವೆ? ಮತ್ತವರು ಬಟ್ಟೆಯ ಬಗ್ಗೆ ಮಾತಾಡುತ್ತಾರೆ!!
~

ಪುರಾಣ ಕಂತೆಗಳನ್ನು ಬಿಡಿ. ಬಹುಶಃ ಅತ್ಯಾಚಾರ ಕುರಿತಂತೆ ಇರುವ ಮೊದಲ ಐತಿಹಾಸಿಕ ದಾಖಲೆ ಇದು. ಧಮ್ಮಪದ ಗಾಥಾ ಪ್ರಸಂಗಗಳು ಕೃತಿಯು ಈ ಕುರಿತು ಹೇಳುತ್ತದೆ.
ಶ್ರಾವಸ್ತಿಯ ಶ್ರೀಮಂತನೊಬ್ಬನಿಗೆ ಅತ್ಯಂತ ಸುಂದರಿಯಾದ ಮಗಳೊಬ್ಬಳು ಇರುತ್ತಾಳೆ. ಅವಳ ಹೆಸರು ಉತ್ಪಲಾವರ್ಣ. ಅವಳನ್ನ ಮೆಚ್ಚಿ ಮದುವೆಯಾಗಲು ಅನೇಕ ರಾಜಕುಮಾರರು ಮುಂದೆ ಬರುತ್ತಾರೆ. ಆದರೆ ಅವಳು ವಿರಾಗಿಣಿ. ಸಂಸಾರದಲ್ಲಿ ಅನಾಸಕ್ತೆ. ಬುದ್ಧನ ಬೋಧನೆಗಳಲ್ಲಿ ಹೃದಯವಿಟ್ಟವಳು. ಅಪ್ಪನ ಮನವೊಲಿಸಿ ತಾನೂ ಬಿಕ್ಖುಣಿಯಾಗುವೆ ಅನ್ನುತ್ತಾಳೆ. ಆ ಶ್ರೀಮಂತನೂ ಬುದ್ಧಾನುಯಾಯಿ. ಸಂಭ್ರಮದಿಂದಲೇ ಆಕೆಗೆ ಅನುಮತಿ ಇತ್ತು ಕಳಿಸಿಕೊಡುತ್ತಾನೆ. ಬಿಕ್ಖುಣಿ ಸಂಘ ಸೇರುವ ಉತ್ಪಲಾ ವರ್ಣ, ಸತತ ಸಾಧನೆಯಿಂದ ಅರಹಂತೆಯೂ ಆಗುತ್ತಾಳೆ.
ಒಮ್ಮೆ ಅವಳು ಕಾಡಿನಲ್ಲಿ ಧ್ಯಾನಕ್ಕೆ ಕುಳಿತಿದ್ದಾಗ ಆಕೆಯ ಚಿಕ್ಕಪ್ಪನ ಮಗ ಬರುತ್ತಾನೆ. ತನ್ನ ದಾಯಾದಿ ಹೀಗೆ ಬಿಕ್ಖುಣಿಯಾಗಿದ್ದು ಅವನಲ್ಲಿ ಮತ್ಸರ ಹುಟ್ಟುಹಾಕಿರುತ್ತದೆ. ಉತ್ಪಲಾವರ್ಣ ಏಕಾಂಗಿಯಾಗಿ ತಪೋನಿರತಳಾಗಿದ್ದ ವೇಳೆಯಲ್ಲಿ ಅವಳ ಮೇಲರಗುತ್ತಾನೆ. ಅತ್ಯಾಚಾರಕ್ಕೆಳಸುತ್ತಾನೆ. ಕಾಡಿನಿಂದ ಮರಳಿದ ಉತ್ಪಲೆ ಈ ಸಂಗತಿಯನ್ನು ಸಹಬಿಕ್ಖುಣಿಯರಲ್ಲಿ ಹೇಳಿಕೊಳ್ಳುತ್ತಾಳೆ. ವಿಷಯ ಬುದ್ಧನ ಕಿವಿ ತಲಪುತ್ತದೆ.
ಬುದ್ಧನ ಚಿಂತನೆ ಅದೆಷ್ಟು ಉದಾತ್ತ ನೋಡಿ…. “ಮತ್ತೊಬ್ಬರ ವಿಕೃತಿಗೆ ಈಕೆಯ ಪಾವಿತ್ರ‍್ಯ ಕೆಡುವುದು ಹೇಗೆ? ಈಕೆಯದೇನೂ ದೋಷವಿಲ್ಲ. ಉತ್ಪಲಾವರ್ಣ ಹಿಂದಿನಂತೆಯೆ ಪರಿಶುದ್ಧಳು” ಅನ್ನುತ್ತಾನೆ. ಮತ್ತು ಆಕೆಯನ್ನು ಎಂದಿನಂತೆಯೇ ಸಂಘದಲ್ಲಿ ಮುಂದುವರೆಯಲು ಹೇಳುತ್ತಾನೆ.

ಅತ್ಯಾಚಾರದ ವಿರುದ್ಧ ಮಾತಾಡುವವರ ಬಾಯ್ಮುಚ್ಚಿಸುತ್ತ ಹೆಣ್ಣಿನ ನಡತೆ ಬಗ್ಗೆ ಪಾಠ ಹೇಳುವವರು ಧ್ಯಾನಸ್ಥಳಾದ ಹೆಣ್ಣನ್ನೂ ಬಯಸುವಂಥ ವಿಕೃತ ಮನಸ್ಥಿತಿಯನ್ನ ಬೆಂಬಲಿಸುವಂಥರೇ ಆಗಿರುತ್ತಾರೆ.
ಇದು ಶಾಶ್ವತ ಪರಿಹಾರವಿಲ್ಲದ ಅನ್ಯಾಯ ಎಂದು ನಿಡುಸುಯ್ಯುವುದಷ್ಟೆ ಉಳಿಯುವುದೇ ಕೊನೆಗೆ?

‘ಹೆಣ್ಣಿಗೇನು ಬೇಕು?’ ~ ನಮ್ಮ ಉತ್ತರಗಳು…

ಈ ಹಿಂದೆ ’ಹೊಸ ತಲೆಮಾರು’ವಿನಲ್ಲಿ  ಎರಡು ಭಾಗಗಳಾಗಿ ನೀಡಿದ ಕಿಷನ್ ಪಟ್ನಾಯಕ್‌ರವರ ಅನುವಾದಿತ ಲೇಖನ ’ಹೆಣ್ಣಿಗೇನು ಬೇಕು? ಸ್ವಾತಂತ್ರ್ಯವೋ, ಸಮಾನತೆಯೋ?’ಗೆ ಕೆಲವು ಪ್ರತಿಕ್ರಿಯೆಗಳು ಬಂದಿವೆ. ಇಲ್ಲಿ ಬರೆದುಕೊಂಡಿರುವ ಹೆಣ್ಣುಮಕ್ಕಳು ಕಿಷನ್‌ರ ವಾದಕ್ಕೆ ತಮ್ಮತಮ್ಮ ರೀತಿಯಲ್ಲಿ ವ್ಯಾಖ್ಯಾನ ನೀಡಿದ್ದಾರೆ. ದಯವಿಟ್ಟು ನಿಮ್ಮ ಪ್ರತಿಕ್ರಿಯೆಗಳನ್ನು ನಮ್ಮ ಮುಖ್ಯಪುಟದಲ್ಲಿ ನೀಡಲಾಗಿರುವ ಇ-ಮೆಯಿಲ್ ವಿಳಾಸ hosatalemaaru@gmail.comಗೆ ಕಳುಹಿಸಿರಿ. ಅವನ್ನು ಇಲ್ಲಿ ಪ್ರಕಟಿಸಲಾಗುವುದು

ಸುಗುಣಾ ಮಲ್ಲೇಶ್ ಹೇಳುತ್ತಾರೆ:

Hai
Hmm I guess the all that gal want is Freedom to say, to stand, to prove herself (not to anybody but to herself)… she is tied up by so many factors like…. the “loved ones”, or the nasty society or the cruel n nutty people around her or by the responsibility(suitable to this century)…..
if she is given freedom she proves herself… and automatically the equality develops or the respect is gained … but if she is curbed of freedom, she can never become what she is actually, inside. I feel she is always being interrupted by responsibility at a very young age … like a marriage, managing a man, his family or a child….or in some cases her sexuality limits her doing so many things like working, or becoming a leader… etc… I still don’t understand the “reservation system” which is given to woman… its not necessary, if this is a democratic country n secularism is there then it should be equal distribution, let them prove themselves n fetch the seats or positions… what ever it is!!!!….the constitution is very old…need to re-constitute it….

talking abt equality… it’s not an other issue… its linked….. It’s something our own…. it’s with nobody else so as to go n asking for it…. (Mind it all guys…it’s not with u guys… so that u are offering us whenever n whomever u like to, love to ..!!!!!!!he he he jus joking… I know he is referring to society in whole) but we should also consider the point , that this society is built by none other than man (in majority)…..if people respect somebody in particular, its their duty to respect the other person in response…. its very inappropriate, foolishness to say like “u want equality????”… I jus want to say… its with no ones hand to offer it to gals or women… its in t hands of  the individual both guys and gals…. they have to perform, prove themselves deservable n gain that equality….no boy is respected if he is useless and burden….. now the era is different… the citizens now think bit intellectually…

so its the freedom(swathantrya) all gals want…. jus freedom not wise(swachchye)…. guys were given full freedom so they could do everything possible by them n proved them efficient enough and gained equality which woman were curbed earlier , now if the same freedom is given to gals , then I guess we too will reach their heights and can be self – contented…its our show time… we need only chance to participate in by the society.

I feel “freedom” is an opportunity and “equality” is the reward u get after achieving ur goal.!!!!!

So we (at least I want freedom in every sense) so that I can prove myself n gain equality……if we ask for equality its jus a prize with zero effort. Which is not enjoyable…. we too are achievers…. we dont want easy success.

ಸುಪರ್‍ಹಿಟ್ಸ್ 93.5 ರೆಡ್ ಎಫ್.ಎಮ್ ನ ಮೈಸೂರು ಕೇಂಡ್ರದ ರೇಡಿಯೋ ಜಾಕಿ ಚೈತ್ರ ಎನ್. ಹೇಳುತ್ತಾರೆ..

ಲೇಖನ ಬಹಳ ಅರ್ಥಪೂರ್ಣವಾಗಿದೆ.ಲೇಖನದ ತುಂಬ ಕ್ರಾಂತಿಯ ಕಿಡಿ ಹಬ್ಬಿದ್ದು  ಅದು ವಿಚಾರವಂತರ  ದೀಪ ಬೆಳಗುವುದು.ಜೊತೆಗೆ  ಮಡಿವಂತರಿಗೆ ಮೈಲಿಗೆ ಮಾಡುವುದು. ಮೈಲಿಗೆಗು ಸಾತ್ವಿಕತೆಗು ವ್ಯತ್ಯಾಸ   ಅರಿಯದ ಜನರು ಹೆಣ್ಣಿನ ಸ್ವತಂತ್ರವನ್ನ ಮೊಟಕು ಮಾಡಲು “ಆಕ್ರಮಣಕಾರಿ” ನೀತಿ ಅನುಸರಿಸುತ್ತ ಬಂದಿದ್ದಾರೆ. ಭಾವನಾತ್ಮಕವಾಗಿಯೇ ಅವಳ ಆಲೋಚನೆಗಳನ್ನು ಮೊಟಕು ಮಾಡಿದ್ದಾರೆ. ಇಂಥಹ ಸಂದರ್ಭದಲ್ಲಿ ಈ ಲೇಖನ ಸಂದರ್ಭೋಚಿತವಾಗಿತ್ತು. ಈ ಲೇಖನದಲ್ಲಿ ಕೇವಲ ಯಾವುದೊ ಒಂದು ಸಮುದಾಯವನ್ನು ಟೀಕಿಸದೆ ಸಮುದಾಯದ ಹೊಣೆಗಾರಿಕೆ,ಕರ್ತವ್ಯಗಳು,ಪ್ರತಿಕ್ರಿಯೆಗಳ ಬಗ್ಗೆ ಬಹಳ ಪಾರದರ್ಶಕವಾಗಿ ಅಭಿಪ್ರಾಯ ಮೂಡಿ ಬಂದಿದೆ. ಯಾವುದೊ ಒಂದು ಸೈದ್ಧಾಂತಿಕ ನಿಲುವಿಗೆ ಜೋತು ಬಿದ್ದು ಕೇವಲ ಸಿದ್ಧಾಂತದ ಪ್ರತಿಪಾದನೆಯಾಗದೆ ವಿಷಯದ ಸೂಕ್ಷ್ಮತೆ ಮತ್ತು ವಿಷಯಕ್ಕೆ ಸಂಬಂಧಿಸಿದ ಹಾಗೆ ಲೇಖನ ವಸ್ತುನಿಷ್ಟವಾಗಿ  ಮೂಡಿ ಬಂದಿದೆ.ಸ್ವತಂತ್ರ  ಮತ್ತು ಸಮಾನತೆ ಒಂದೇ ನಾಣ್ಯದ ೨ ಮುಖಗಳು  ಎಂಬ ಅಂಶ ಮೆಚುಗೆಯಾಯಿತು. ವಾಸ್ತವಕ್ಕೆ ಹೆಚ್ಹು ಒತ್ತುಕೊಟ್ಟು ಮೂಡಿರುವ ಈ ಲೇಖನದ ಅಂತ್ಯ ಕೊಂಚ ಕಷ್ಟವೇನೋ ಅನಿಸಿದೆ. ಎಲ್ಲ ನಿಯಮಗಳನ್ನ ಮೀರಿ ಸಾಗಬೇಕಾದರೆ ಕೆಲವೊಂದು ಸ್ವಾವಲಂಬನೆ ಅಗತ್ಯವಿದೆ.ಉದಾ :ಅರ್ಥಿಕ,ಶೈಕ್ಷಣಿಕ ….. ಈ ನಿಟ್ಟಿನಲ್ಲಿ ಇದು ಬಹಳ ಸಮಯ ಬೇಡುತ್ತದೆ. ಕ್ರಾಂತಿಯೇ ಹಾಗಲ್ಲವೇ ?ಒಟ್ಟಿನಲ್ಲಿ ತುಂಬ ವಿಚಾರಪೂರ್ಣ ಲೇಖನ. ಮೆಚ್ಹುಗೆ ಯಾಯಿತು.

ಅಭಿನೇತ್ರಿ ಜಯಲಕ್ಷ್ಮಿ ಪಾಟೀಲ್ ಹೇಳುತ್ತಾರೆ:

ನಮಸ್ಕಾರ.
ಬರಹ ತೀಕ್ಷ್ಣ ಮತ್ತು ಕ್ಲೀಷೆಯಾಗಿದೆ ಅನಿಸ್ತು. ಲೇಖನದ ಮೊದಲ ಭಾಗ ತುಂಬಾ ತರ್ಕಬದ್ಧವಾಗಿ ಮೂಡಿ ಬಂದಿದೆ. ಎರಡನೆಯ ಭಾಗದಲ್ಲಿ ಲೇಖಕರು ಹೆಣ್ಣಿನ ಸ್ವಾತಂತ್ರ, ಸಮಾನತೆಯ ಬಗ್ಗೆ ಮಾತಾಡುತ್ತಲೇ ಗಂಡು ಸಂಸಾರ ಬಂಧನಕ್ಕೊಳಗಾಗುವ ಆತಂಕ ವ್ಯಕ್ತಪಡಿಸಿದ್ದು ನೋಡಿದರೆ, ಲೈಂಗಿಕ ಮುಕ್ತತೆಯ ಬಗ್ಗೆ ಹೇಳಿದ್ದನ್ನು ಕಂಡರೆ, ಸಮಾಜ ಪದ್ದತಿಯ ವ್ಯವಸ್ಥೆ ಹದಗೆಡುವುದಿಲ್ಲವೆ ಇದರಿಂದ ಅನ್ನುವ ಪ್ರಶ್ನೆ ಮೂಡುತ್ತದೆ. ಸ್ವಾತಂತ್ರ ಅನ್ನುವುದು ಮಾನವ ಅಥವಾ ಪ್ರತಿಯೊಂದು ಜೀವಿಯೂ ಹುಟ್ಟಿನಿಂದಲೇ ಪಡೆದು ಬಂದಿರುವಂಥದ್ದು. ಅದು ಹೆಣ್ಣೇ ಇರಲಿ, ಗಂಡೇ ಇರಲಿ ಸ್ವಾತಂತ್ರ ಸ್ವೇಚ್ಛೆಯಾಗದಿದ್ದಲ್ಲಿ ಸ್ವಂತದ ಮತ್ತು ಸಮಾಜದ ಆರೋಗ್ಯ ಸ್ವಸ್ಥವಾಗಿರುತ್ತದೆ. ಮನುಷ್ಯ ಸಂಘಜೀವಿ. ಎಷ್ಟೇ ಸ್ವತಂತ್ರವಾಗಿ ಬದುಕುತ್ತೇವೆಂದುಕೊಂಡರೂ ಆಗದು. ಲೈಂಗಿಕ ಬೇಡಿಕೆ ಭಾರತೀಯ ಹೆಣ್ಣಿನ ಮಟ್ಟಿಗೆ(ಉಳಿದ ದೇಶಗಳ ಬಗ್ಗೆ ನನ್ನ ಅರಿವು ಅಷ್ಟಿಲ್ಲವಾದ್ದರಿಂದ ಪ್ರಪಂಚದ ಕುರಿತು ಮಾತಾಡಾಲಾರೆ. ಆದರೆ ಪ್ರಪಂಚದ ಉಳಿದೆಡೆಯೂ ಪ್ರೀತಿ, ಪ್ರೇಮದ ಹೆಸರಲ್ಲಿ ಜಗಳ, ವಿಚ್ಛೇದನ, ಕೊಲೆ ಎಲ್ಲ ನಡೆಯುವುದನ್ನು ಕಂಡರೆ ಪ್ರಪಂಚದ ಯಾವ ಭಾಗದ ಮನುಷ್ಯರಾದರೂ ಭಾವನೆಗಳು ಒಂದೇ ಥರ ಅನ್ನುವುದು ವಿದಿತವಾಗುತ್ತದೆ, ವ್ಯಕ್ತಪಡಿಸುವ ವಿಧಾನಗಳು ಬೇರೆಯಾಗಬಹುದು ಅಷ್ಟೆ.)ಕೇವಲ ದೈಹಿಕವಲ್ಲ. ಬರೀ ದೇಹದ ಕೋರಿಕೆಯೊಂದನ್ನೇ ಗಮನದಲ್ಲಿಟ್ಟುಕೊಂಡು ವರ್ತಿಸುವುದು ಭಾರತೀಯ ಹೆಣ್ಣಿಗೆ ಸಾಧ್ಯವಾದಲ್ಲಿ ನಮ್ಮ ಸಮಾಜ ಹೇಗೆ ಅದನ್ನು ಎದುರಿಸಬಹುದು ಅನ್ನುವುದರ ಬಗ್ಗೆ ಕುತೂಹಲವಿದೆ.ಯಾರೂ ಯಾರ ಗುಲಾಮರೂ ಅಲ್ಲ, ದುರ್ಬಲ ಮನಸ್ಸಿನವರನ್ನು ಯಾರು ಬೇಕಾದರೂ ಗುಲಾಮರನ್ನಾಗಿಸಿಕೊಳ್ಳಬಹುದು. ಅದು ಹೆಣ್ಣೇ ಆಗಬೇಕೆಂದಿಲ್ಲ. ಸಮಾನತೆ ಬೇಕು ಅಂತ ಬೇಡಿಕೊಳ್ಳೋದೇ ಅಸಹ್ಯಕರ ಅನಿಸೋದಿಲ್ವೆ? ಯಾಕೆಂದರೆ ನಮ್ಮಲ್ಲಿ ಯಾವತ್ತು ಕೀಳರಿಮೆ ತುಂಬಿಕೊಳ್ಳುತ್ತೊ ಅಥವಾ ಎಲ್ಲಿಯವರೆಗೆ ಕೀಳರಿಮೆ ಇರುತ್ತದೋ ಆಗ ಅಂಥ ದಯನೀಯ ಬೇಡಿಕೆ ಮುಂದಿಡಲ್ಪಡುತ್ತದೆ. ಜೊತೆಗೆ ಅಸಹಾಯಕತೆ. ಅದೂ ಸಹ ಅಸಮಾನತೆಯ ಅಂತರ ತೋರುವಂತೆ ಮಾಡುತ್ತದೆ. ಅಲ್ಲದೇ ಹುಟ್ಟುತ್ತಲೇ ಯಾರೂ ಯಾರ ಗುಲಾಮರಾಗಿ ಹುಟ್ಟುವುದಿಲ್ಲವಾದ್ದರಿಂದ ನಮ್ಮ ಸ್ಥಿತಿಗತಿಗಳಿಗೆ ನಾವೇ ಕಾರಣರಾಗಿ ಸಮಾನತೆ-ಅಸಮಾನತೆಯ ಸ್ಥಾನಗಳು ಏರ್ಪಡುತ್ತವೆ.
ಭಾರತೀಯ ಹೆಣ್ಣಿಗೆ ಶತಮಾನದ ಹಿಂದಿನವರೆಗೂ ತನ್ನ ಸಾಮರ್ಥ್ಯದ ಅರಿವಿರಲಿಲ್ಲ (ಅಪರೂಪವೆಂಬಂತೆ ಕಾಣ ಸಿಗುವ ಕೆಲ ಸಬಲೆಯರ ಉದಾಹರಣೆಗಳ ಹೊರತಾಗಿ), ಆದರೆ ಈಗ ಅರಿವಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಣ್ಣು ಈಗಿರುವ ಸ್ಥಿತಿಯಲ್ಲಿ ಖಂಡಿತ ಇರುವುದಿಲ್ಲ. infact ಈಗಲೇ ಬೇಕಾದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳತೊಡಗಿದ್ದಾಳೆ ವೈಚಾರಿಕ ನೆಲೆಯಲ್ಲಿ, ತನ್ನ ಬದುಕಿನ ಶೈಲಿಯಲ್ಲಿ.

ಹೆಣ್ಣಿಗೇನು ಬೇಕು: ಸ್ವಾತಂತ್ರ್ಯವೋ? ಸಮಾನತೆಯೋ?

ಆದ್ಯತೆ ಅನ್ನುವ ಪದವೇ ಮೊದಲು ಪ್ರತಿಭಟನೆಗೆ ಒಳಗಾಗ ಬೇಕು ಎಂಬ ಶೀರ್ಷಿಕೆಯಡಿ ಪ್ರಕಟಿಸಲಾದ ಬರಹಗಳು ಒಂದೇ ಲೇಖನದ ಎರಡು ಭಾಗಗಳು. (ಭಾಗ-1, ಭಾಗ-2 ಓದಲು ಅವುಗಳ ಮೇಲೆ ಕ್ಲಿಕ್ಕಿಸಿ).  ಅವುಗಳ ಇಂಟ್ರೋದಲ್ಲಿ ಹೇಳಿರುವ ಹಾಗೆ ಚಿಂತಕ ಕಿಶನ್ ಪಟ್ನಾಯಕ್ ಅವರ ಲೇಖನವಿದು. ಈ ಲೇಖನಕ್ಕೆ ಹಲವು ಪ್ರತಿಕ್ರಿಯೆಗಳು ಬಂದಿದ್ದು, ಅದನ್ನು ಮುಂದೆ ಸಂವಾದಕ್ಕಾಗಿ ಇಲ್ಲಿ ಹಾಕಲಾಗುವುದು. ನೀವೂ ಈ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು.

ಅಂದಹಾಗೆ, ಹೆಣ್ಣಿಗೇನು ಬೇಕು: ಸ್ವಾತಂತ್ರ್ಯವೋ? ಸಮಾನತೆಯೋ? ಅನ್ನುವ ಶಿರೋನಾಮೆಗೆ ಬದಲಾಗಿ ನಾನು ‘ಆದ್ಯತೆ’ ಅನ್ನುವ ಪದವೇ ಪ್ರತಿಭಟನೆಗೆ ಒಳಗಾಗಬೇಕು ಅನ್ನುವ ಅವರ ಹೇಳಿಕೆಯನ್ನೇ ಶಿರೋನಾಮೆಗೆ ಬಳಸಿಕೊಂಡಿದೇನೆ. ಕಾರಣವಿಷ್ಟೇ, ಅದು ನನ್ನ ವೈಯಕ್ತಿಕ ಅನಿಸಿಕೆ ಕೂಡ ಆಗಿದೆ.  ನಾನೂ ಅದನ್ನು ಬಲವಾಗಿ ಪ್ರತಿಪಾದಿಸುತ್ತೇನೆ.

ಜೊತೆಗೆ, ಈ ಲೇಖನದಲ್ಲಿ ಚರ್ಚಿಸಬಹುದಾದ, ಒಪ್ಪದೆ ಇರಬಹುದಾದ ಅನೇಕ ಅಂಶಗಳೂ ಇವೆ. ಎಲ್ಲ ಪ್ರತಿಕ್ರಿಯೆಗಳನ್ನೂ ಕ್ರೋಢೀಕರಿಸಿ ಇದೇ ಚ್ಲಾಗ್ ನಲ್ಲಿ ಪ್ರಕಟಿಸಲಾಗುವುದು.